ಇಂದಿನ ನ್ಯಾಯಾಲಯದ ನೇಮಕಾತಿಗಳ ವಿಚಾರಣೆ ಕುರಿತು ಮಾನ್ಯ ನ್ಯಾಯಾಲಯದಿಂದ ಯಾವುದೇ ಮಧ್ಯಂತರ ಆದೇಶವಾಗಲೀ, ಯಾವುದೇ ಸೂಚನೆಗಳಾಗಲೀ ಬಂದಿರುವುದಿಲ್ಲ.
ಇಂದಿನ ಸಂಪೂರ್ಣ ವಾದ-ವಿವಾದವು ಮಾನ್ಯ ನ್ಯಾಯಾಧೀಶರು, AG ಮತ್ತು Opposition ನಡುವಿನ ಚರ್ಚೆಗಳಾಗಿದ್ದು, ನೇಮಕಾತಿ ನಡೆಸುವ ಸಾಧ್ಯತೆಗಳ ಬಗ್ಗೆ ಆದೇಶ ಹೊರಡಿಸುವ ಸಲುವಾಗಿ AG ಯವರು ಸರ್ಕಾರದ ಜೊತೆ ಚರ್ಚಿಸಿ ತಿಳಿಸುವುದಾಗಿ ಕೋರಿದ್ದು, ಮತ್ತು ಇತರೆ ರಾಜ್ಯಗಳ ವಿಚಾರಣೆ ಮಾನ್ಯ ಸುಪ್ರೀಂ ಕೋರ್ಟ್ ನಲ್ಲಿದ್ದು ಅದರ ಫಲಿತಾಂಶ ಅರಿತು ಮುಂದಿನ ಹೆಜ್ಜೆ ಇಡಬಹುದಾಗಿರುವುದರಿಂದ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ.
ಇದನ್ನು ಕೆಲವರು ತಮ್ಮ ತಮ್ಮ ಲಾಭಕ್ಕಾಗಿ ತಮಗಿಚ್ಚೆ ಬಂದಂತೆ ಮಾನ್ಯ ನ್ಯಾಯಾಲಯದ ಆದೇಶವೆಂಬಂತೆ ವ್ಯಾಖ್ಯಾನಿಸುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಇದರಿಂದ ಧೃತಿಗೆಡಬಾರದು ಮತ್ತು ಮುಂದಿನ ತಿಂಗಳಿನ ವಿಚಾರಣೆಯವರೆಗೆ ಹಿಂದಿನ ಆದೇಶದ ಯಥಾಸ್ಥಿತಿ ಇರುವುದೆಂದು ತಿಳಿಯುವುದು.

2January 20, 2026 10.1K 4